5 ದಿನಗಳ ಹಿಂದೆ ನಗರದ ಮನೆಯಲ್ಲಿ ಬೆಳ್ಳಿ-ಬಂಗಾರ ಕಳ್ಳತನ
ಕಳ್ಳರ ಬೇಟೆ ಮಾಡಿದ ಎಸಿಪಿ ನೇತೃತ್ವದ ಪೋಲಿಸ್ ಪಡೆ
ಬೆಳಗಾವಿ: ನಗರದ ಮಾರ್ಕೆಟ್ ಠಾಣೆ ಪೊಲೀಸರು ಎಸಿಪಿ ನಾರಾಯಣ ಬರ್ಮನಿ ನೇತೃತ್ವದಲ್ಲಿ ಮನೆಗಳ್ಳತನ ಮಾಡಿದ ಅರೋಪಿಯನ್ನು ಬಂಧಿಸಿದ್ದು, 10 ಲಕ್ಷ ರೂ. ಮೌಲ್ಯದ ಬಂಗಾರ ಮತ್ತು ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ದಿನಾಂಕ: 20/05/2023 ರಂದು ಮಾರ್ಕೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ಸಮರ್ಥ ನಗರದ ಒಂದು ಮನೆಯಲ್ಲಿ ಕಳ್ಳರು ಬಂಗಾರ ಮತ್ತು ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಮಾರ್ಕೇಟ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಕೈಗೊಳ್ಳಲಾಗಿತ್ತು.
ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಎನ್ ವಿ ಭರಮನಿ ಎಸಿಪಿ ಮಾರ್ಕೆಟ್ ಉಪವಿಭಾಗ ಬೆಳಗಾವಿ ರವರ ನೇತೃತ್ವದಲ್ಲಿ ಮಹಾಂತೇಶ ಧಾಮನ್ನವರ ಹಾಗೂ ಅವರ ತಂಡ ಮಾಹಿತಿ ಕಲೆ ಹಾಕಿ ಆರೋಪಿತನಾದ ನಿಪ್ಪಾಣಿಯ ಯಾಸೀನ ಹಾಸಿಮ ಶೇಖ (23) ಈತನನ್ನು ಬಂಧಿಸಿ ಈತನಿಂದ ಸುಮಾರು 10 ಲಕ್ಷ ಮೌಲ್ಯದ 231 ಗ್ರಾಂ ಬಂಗಾರ ಮತ್ತು 140 ಗ್ರಾಂ ಬೆಳ್ಳಿಯ ಆಭರಣಗಳನ್ನು ಜಪ್ತಪಡಿಸಿಕೊಂಡು ಆತನ ವಿರುದ್ದ ಕಾನೂನು ಕ್ರಮ ಜರುಗಿಸಿ, ತನಿಖೆ ಮುಂದುವರೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
0 Comments