Kittur : ಶಾಸಕರಾಗಿ ಪ್ರಪ್ರಥಮ ಭಾರಿಗೆ ಕಲಭಾಂವಿ ಗ್ರಾಮಕ್ಕೆ ಆಗಮಿಸಿದ ಬಾಬಾಸಾಹೇಬ ದೇ ಪಾಟೀಲ

ಶಾಸಕರಾಗಿ ಪ್ರಪ್ರಥಮ ಭಾರಿಗೆ ಕಲಭಾಂವಿ ಗ್ರಾಮಕ್ಕೆ ಆಗಮಿಸಿದ ಬಾಬಾಸಾಹೇಬ ದೇ ಪಾಟೀಲ ಅವರನ್ನು ಕಲಭಾಂವಿ ಗ್ರಾಮಸ್ಥರು ಆತ್ಮೀಯವಾಗಿ ಬರಮಾಡಿಕೊಂಡರು.

ಗ್ರಾಮದ ಪ್ರತಿಯೊಂದು ಓಣಿ ಗಲ್ಲಿಯಲ್ಲಿ ಸಂಚರಿಸಿ, ಸರ್ವ ಸಮುದಾಯದ ದೇವಸ್ಥಾನ, ಮಸೀದಿ, ಬಸದಿಗಳಿಗೆ ಭೇಟಿನೀಡಿ ಆಶೀರ್ವಾದ ಪಡೆಯುವುದರೊಂದಿಗೆ, ಆಯಾ ಓಣಿಯಲ್ಲಿರುವ ಕುಂದುಕೊರತೆಗಳನ್ನು ಜನ ಮುಖಂಡರಿಂದ ತಿಳಿದುಕೊಂಡರು.

ಕಲಭಾಂವಿ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಕಲಭಾಂವಿ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು *"ಸರಕಾರದ ಪಂಚಯೋಜನೆಗಳಾದ ಗೃಹಜ್ಯೋತಿ, ಗೃಹಲಕ್ಷ್ಮೀ, ಅನ್ನಭಾಗ್ಯ, ಶಕ್ತಿ ಯೋಜನೆಗಳು ಪ್ರತಿಯೊಂದು ಕುಟುಂಬಕ್ಕೆ ತಲುಪುತ್ತಿವೆ. ಯುವನಿಧಿ ಶೀಘ್ರವೇ ಜಾರಿಗೆ ಬರಲಿದೆ. ಈ ಯೋಜನೆಯ ಸೌಲಭ್ಯಗಳನ್ನು ಸದ್ಬಳಕೆಮಾಡಿಕೊಳ್ಳಬೇಕು. ಕೌಶಲ್ಯಯುತ ಶಿಕ್ಷಣ ಮುಖ್ಯವಾದದ್ದು ತಮ್ಮ ಮಕ್ಕಳನ್ನು ಸುಶಿಕ್ಷಿತರನ್ನಾಗಿ ಮಾಡಿರಿ. ಎಲ್ಲರೂ ಕೃಷಿಯನ್ನು ಅವಲಂಭಿಸುವುದು ಬೇಡ, ಮಕ್ಕಳಿಗೆ ಆಸ್ತಿ ಮಾಡದೇ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿರಿ. ಪ್ರತಿಯೊಂದು ಗ್ರಾಮಕ್ಕೆ ಹೋದಾಗ ಕೇಳಿ ಬರುವ ಮೊದಲ ಬೇಡಿಕೆಯೇ ಗುಡಿ, ಬಸದಿ, ಮಸೀದಿಗಳ ಅಭಿವೃದ್ಧಿಯೇ ಹೊರತು ಶಾಲೆಗಳ ಅಭಿವೃದ್ಧಿ ಅಲ್ಲ. ಮಕ್ಕಳನ್ನು ಅತ್ಯುತ್ತಮ ಪ್ರಜೆಗಳನ್ನಾಗಿಸುವ ಸಮಾಜದ ಅಭಿವೃದ್ಧಿಗೆ ಆಧಾರವಾದ ಶಿಕ್ಷಣವನ್ನು ನೀಡುವ ಶಾಲೆಗಳ ಅಭಿವೃದ್ಧಿಗೆ ನನ್ನ ಮೊದಲ ಆದ್ಯತೆ,  ತದನಂತರ ತಮ್ಮ ಬೇಡಿಕೆಯಂತೆ ಧಾರ್ಮೀಕ ಕೇಂದ್ರಗಳ ಅಭಿವೃದ್ಧಿ. ಹಂತ ಹಂತವಾಗಿ ತಮ್ಮೆಲ್ಲ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ತಿಳಿಸಿದರು.*

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಶಿವನವ್ವ ರಾ ಕರಡಿ, ಉಪಾಧ್ಯಕ್ಷರಾದ ಶ್ರೀ ಮುಶಪ್ಪ ದೇಮಟ್ಟಿ, ಸದಸ್ಯರಾದ ಶ್ರೀಸಂಗಮೇಶ ವಕ್ಕುಂದ ಹಾಗೂ ಗ್ರಾಮ ಪಂಚಾಯತಿಯ ಮಾಜಿ ಸದಸ್ಯರಾದ ಶ್ರೀ ಬಸವರಾಜ ಕದಂ, ಶ್ರೀದೇಮಪ್ಪ ವಕ್ಕುಂದ, ಶ್ರೀಬಾಬಾಜಾನ ಬೆಳವಡಿ, ಶ್ರೀರಾಚಯ್ಯ ಪೂಜೇರ, ಶ್ರೀಗಂಗಪ್ಪ ಮಲಕಿನಕೊಪ್ಪ ಹಿರಿಯರಾದ ಶ್ರೀ ರವೀಂದ್ರ ಸೋಮನಟ್ಟಿ, ಶ್ರೀ ಇಸ್ಮಾಯಿಲ ಬೆಳವಡಿ, ಶ್ರೀಮತಿ ಬಸವ್ವ ಆರೇನಾಡ, ಶ್ರೀ ಫಕ್ಕೀರಪ್ಪ ಬಡಿಗೇರ, ಶ್ರೀ ಉಳವಪ್ಪ ನಂದೆನ್ನವರ, ಶ್ರೀ ತಿಪ್ಪಣ್ಣ ದಳವಾಯಿ, ಶ್ರೀ ಈಶ್ವರ ಅಂಗಡಿ, ಶ್ರೀ ಸುರೇಶ ಬೈರನ್ನವರ, ಶ್ರೀ ಈರಪ್ಪ ಮಾದರ, ಶ್ರೀ ಬಸವರಾಜ ನಡುವಿನಹಳ್ಳಿ, ಶ್ರೀ ಪಾರೀಸ ಬೆಟಗೇರಿ ಗ್ರಾಮ ಪಂಚಾಯತಿ ಸಿಬ್ಬಂಧಿಗಳಾದ  ಶ್ರೀ ರುದ್ರಪ್ಪ ಜಾಂಗಟಿ, ಶ್ರೀ ಮಡಿವಾಳಪ್ಪ ತಿಗಡಿ@ದಳವಾಯಿ, ಶ್ರೀ ಪ್ರವೀಣ ಸೋಮನಟ್ಟಿ, ಶ್ರೀ ದೇಮಪ್ಪ ಹೈಬತ್ತಿ ಸೇರಿದಂತೆ ಗ್ರಾಮದ ಯುವಕರು, ಸಾರ್ವಜನಿಕರು, ಸುತ್ತಮುತ್ತಲಿನ ಗ್ರಾಮಗಳ ಹಿರಿಯರು ಉಪಸ್ಥಿತರಿದ್ದರು.

Post a Comment

0 Comments