Krushi : ನರೇಗಾ ನೆರವಿನಿಂದ ಕೃಷಿಯಲ್ಲೇ ಖುಷಿಕಂಡ ಇಂಜಿನಿಯರ್


ನರೇಗಾ ನೆರವಿನಿಂದ ಕೃಷಿಯಲ್ಲೇ ಖುಷಿಕಂಡ ಇಂಜಿನಿಯರ್

 ಮಹಾಂತೇಶ ಕೈತುಂಬಾ ಸಂಪಾದನೆ ತಂದ ಸೀತಾಫಲ 


ಲಕ್ಷಗಟ್ಟಲೇ ಸಂಬಳ ಕೊಡುವ ಇಂಜಿನಿಯರಿಂಗ್ ಉದ್ಯೋಗ ತೊರೆದ ಯುವಕನೋರ್ವ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ನೆರವಿನಿಂದ ಕೃಷಿಯಲ್ಲಿಯೇ ಖುಷಿ ಕಂಡುಕೊಂಡಿದ್ದು, ಎರಡು ಎಕರೆಯಲ್ಲಿ ಸೀತಾಫಲ ಬೆಳೆದು ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ.

ಚನ್ನಮ್ಮನ ಕಿತ್ತೂರು ತಾಲೂಕಿನ     ಕಲಭಾಂವಿ ಗ್ರಾಮದ ಯುವಕ ಮಹಾಂತೇಶ ಉಳವಯ್ಯ ಜಮಲೂರಮಠ ಎಂಬ ಪದವೀಧರನೇ ಕೃಷಿಯಲ್ಲಿ ಖುಷಿಕಂಡುಕೊಂಡವರು.  ಕಿತ್ತೂರು ತಾಲೂಕು ಪಂಚಾಯಿತಿ ವ್ಯಾಪ್ತಿಯ ಕಲಭಾಂವಿ ಗ್ರಾಮದಲ್ಲಿರುವ ತಮ್ಮ ಎರಡು ಎಕರೆ ಜಮೀನಿನಲ್ಲಿ ಸೀತಾಫಲ ಬೆಳೆದಿರುವ ಮಹಾಂತೇಶ ಅವರು, ಇದೀಗ ಲಕ್ಷಾಂತರ ರೂ.ಆದಾಯ ಗಳಿಸಿದ್ದಾರೆ. 

ಜಿಲ್ಲೆ: ಬೆಳಗಾವಿ
ತಾಲ್ಲೂಕು: ಚನ್ನಮ್ಮನ ಕಿತ್ತೂರು
ಗ್ರಾಮ ಪಂಚಾಯತಿ: ಕಲಭಾಂವಿ
ಗ್ರಾಮ: ಕಲಭಾಂವಿ
ಕಾಮಗಾರಿಯ ಕೋಡ್: 1504002/IF/93393042894180829
ಕಾಮಗಾರಿಯ ಹೆಸರು: ಉಳವಯ್ಯ ಮೂಗಯ್ಯ ಜಮಳೂರ ಇವರ ಜಮೀನಿನಲ್ಲಿ ಸೀತಾಫಲ ತೋಟ ವಿಸ್ತರಣೆ ಮಾಡುವುದು.
ಫಲಾನುಭವಿ ಹೆಸರು: ಮಹಾಂತೇಶ ಉಳವಯ್ಯ ಜಮಲೂರಮಠ
ಅಂದಾಜು ಮೊತ್ತ: 33300/-
ಕೂಲಿ:14958/-
ಸಾಮಗ್ರಿ ವೆಚ್ಚ: 18330/-
ಅನುಷ್ಠಾನ ಇಲಾಖೆ: ಗ್ರಾಮ ಪಂಚಾಯತಿ ಕಲಭಾಂವಿ


 

Post a Comment

0 Comments