Belagavi : ಕೆರೆಯಲ್ಲಿ ಮುಳುಗುತ್ತಿದ್ದ ಮಹಿಳೆಯನ್ನು ರಕ್ಷಿಸಿದ ಆರಕ್ಷಕ

ಬೆಳಗಾವಿ: ಮಹಿಳೆಯೊಬ್ಬರು ಕೆರೆಯಲ್ಲಿ ಮುಳುಗುತ್ತಿದ್ದಾಗ ಕರ್ತವ್ಯ ನಿರತ ಪೋಲಿಸ್ ಪೇದೆಯೊಬ್ಬರು ಸಮವಸ್ತ್ರದಲ್ಲೇ ಮುಳುಗಿ ರಕ್ಷಿಸಿದ ಘಟನೆ ನಗರದಲ್ಲಿ ವರದಿಯಾಗಿದೆ. ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ನಗರದ ಬೆಳಗಾವಿ ಕೋಟೆ ಕೆರೆ (ಕಿಲ್ಲಾ ಕೆರೆ)ಯಲ್ಲಿ ಸಂಜೆ 4.45 ರ ಸಮಯದಲ್ಲಿ ಈ ಘಟನೆ ನಡೆದಿದೆ.
ಅಪತ್ಭಾಂಧವನಾಗಿ ಮಹಿಳೆಯನ್ನು ಕಾಪಾಡಿದ ಪೇದೆ ಕಾಶಿನಾಥ್ ಈರಗಾರ್ ಅವರಿಗೆ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ಇವರು ಮಾರ್ಕೆಟ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಉತ್ತರ ವಲಯ ಟ್ರಾಫಿಕ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
42 ವರ್ಷದ ಶಿವಲೀಲಾ ಚನ್ನಗೌಡ ಪರ್ವತ ಗೌಡ್ರು ಸಾಕಿನ್ ಬೈಲವಾಡ್ ಆತ್ಮಹತ್ಯೆಗೆ ಪ್ರಯತ್ನಿಸಿದ ಮಹಿಳೆ ಎಂದು ತಿಳಿದು ಬಂದಿದೆ.


Post a Comment

0 Comments