ಕಿತ್ತೂರು ವಿಜಯ ಸುದ್ದಿ.ಸೋಮವಾರ ಕಲ್ಮಠದಲ್ಲಿ ಶಿವಾನುಭವ ಪ್ರಯುಕ್ತ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ ಚನ್ನಮ್ಮನ ಕಿತ್ತೂರು:- ಕಿತ್ತೂರಿನ ಕಲ್ಮಠದ ಶ್ರೀ ಶಂಕರ ಚಂದರಗಿ ಸಭಾ ಭವನದಲ್ಲಿ ಸೋಮವಾರ ದಿನಾಂಕ ೧೨ ರಂದು ಸಾಯಂಕಾಲ ೭ ಗಂಟೆಗೆ ರಾಜಗುರು ಸಂಸ್ಥಾನ ಕಲ್ಮಠ ಮತ್ತು ಕಿತ್ತೂರ ತಾಲೂಕಾ ಕನ್ನಡ ಸಾಹಿತ ಪರಿಷತ್ತುಗಳ ಸಂಯುಕ್ತ ಆಶ್ರಯದಲ್ಲಿ ಮಾಸಿಕ ಶಿವಾನುಭವ ಕಾರ್ಯಕ್ರಮದ ಪ್ರಯುಕ್ತವಾಗಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ಕಿತ್ತೂರು ತಾಲೂಕಿಗೆ ಪ್ರಥಮ, ದ್ವಿತೀಯ, ತೃತೀಯ ಬ್ಯಾಂಕ್ ಗಳಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಕಿತ್ತೂರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಎಸ್.ಬಿ.ದಳವಾಯಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶ್ರೀ ಕಲ್ಮಠದ ಪೂಜ್ಯ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳ ಸಾನಿಧ್ಯ ಮತ್ತು ನಿಚ್ಚಣಕಿಯ ಪೂಜ್ಯ ಶ್ರೀ ಪಂಚಾಕ್ಷರಿ ಮಹಾಸ್ವಾಮಿಗಳ ಅಧ್ಯಕ್ಷತೆಯಲ್ಲಿ ನಡೆಯಲಿರುವ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿರುವ ಸ್ವಾತಿ ಶಿವಾನಂದ ತಿಗಡಿ ಸರಕಾರಿ ಪ್ರೌಢಶಾಲೆ ಬೊದಾನಪೂರ, ಲಕ್ಷ್ಮೀ ಉತ್ತಮ ಅಂಬಡಗಟ್ಟಿ ಸರಕಾರಿ ಪ್ರೌಢಶಾಲೆ ವೀರಾಪೂರ, ಸೌಭಾಗ್ಯ ಮಹಾಂತಯ್ಯ ವಸ್ತ್ರದ, ಸರಕಾರಿ ಪ್ರೌಢಶಾಲೆ ವೀರಾಪೂರ ಮತ್ತು ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ಸಾಧನೆ ಮಾಡಿರುವ ಕಲಾ ವಿಭಾಗದ ಸವಿತಾ ಕೆಳಗಿನಮನಿ ಕಿ.ನಾ.ವಿ.ವ.ಸಂಘದ ಪ.ಪೂ.ಕಾಲೇಜು ಕಿತ್ತೂರು , ವಾಣಿಜ್ಯ ವಿಭಾಗದ ಪೂಜಾ ಸಾಧುನವರ ಕಿ.ನಾ.ವಿ.ವ. ಸಂಘದ ಪ.ಪೂ.ಕಾಲೇಜು ಕಿತ್ತೂರು, ವಿಜ್ಞಾನ ವಿಭಾಗದ ಜ್ಯೋತಿ ಅಕ್ಕಿಸಾಗರ ಆರ್.ಜಿ,ಎಸ್.ಸರಕಾರಿ ಪ.ಪೂ,ಕಾಲೇಜು ಕಿತ್ತೂರು ಮತ್ತು ಕ್ರೀಡಾ ಕ್ಷೇತ್ರದ ಸಾಧಕಿ ರಾಜಗುರು ಶಿಕ್ಷಣ ಸಂಸ್ಥೆಯ ಮುಖ್ಯಾಧ್ಯಾಪಕಿಯರಾದ ಶ್ರೀಮತಿ ದೀನಾ ಎಫ್.ಲಂಗೋಟಿ ಇವರುಗಳನ್ನು ಗೌರವಿಸಲಾಗುವದು. ಕಿತ್ತೂರಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಸಿ.ವೈ,ತುಬಾಕಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು ಡಾ.ಎಸ್.ಬಿ.ದಳವಾಯಿ ಪ್ರಾಸ್ತಾವಿಕ ನುಡಿಗಳನ್ನು ಆಡುವದರ ಜೊತೆಗೆ ಪ್ರತಿಭಾವಂತರ ಶಿಕ್ಷಣ ಕುರಿತು ಮಾತನಾಡುವರು..
ಪ್ರತಿ ತಿಂಗಳು ಹುಣ್ಣಿಮೆಯ ದಿವಸ ನಡೆಯಲಿರುವ ಈ ಮಾಸಿಕ ಶಿವಾನುಭವ ಕಾರ್ಯಕ್ರಮದಲ್ಲಿ ಶ್ರೀ ಈಶ್ವರ ಗಡಿಬಿಡಿ, ಶ್ರೀ ಪ್ರಲ್ದಾದ ಶಿಗ್ಗಾಂವಿ ನೇತೃತ್ವದ ಶ್ರೀ ಗ್ರಾಮ ದೇವಿ ಭಜನಾ ಮಂಡಳ, ರಾಣಿ ಚನ್ನಮ್ಮ ಮತ್ತು ಬೆಳ್ಳಿ ಚುಕ್ಕಿ ಮಹಿಳಾ ಮಂಡಳದವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದ್ದು ಕಿತ್ತೂರ ನಾಡಿನ ಶರಣ ಶರಣೆಯರು ಭಾಗವಹಿಸಬೇಕೆಂದು ಶ್ರೀ ಕಲ್ಮಠದ ಸಕಲ ಸದ್ಭಕ್ತರ ಪರವಾಗಿ ಕೋರಲಾಗಿದೆ.
0 Comments