ಕಾರ್ ಬೈಕ್ ಡಿಕ್ಕಿ: ಇಬ್ಬರು ಸಾವು

ಕಿತ್ತೂರು ವಿಜಯ
ಬೈಲಹೊಂಗಲ: ಮಹೀಂದ್ರಾ ಜೈಲೋ ಕಾರ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಸಮೀಪದ ಇಂಚಲ ರಸ್ತೆಯಲ್ಲಿ ಶುಕ್ರವಾರ ಜರುಗಿದೆ.

ಮೃತರನ್ನು ಚಚಡಿ ಗ್ರಾಮದ ಬಸವರಾಜ ಬೆಳವಡಿ(40), ಸುರೇಶ ಗಿರೆಪ್ಪಗೋಳ(40) ಎಂದು ಗುರುತಿಸಲಾಗಿದೆ. 
ಬೈಕ ಸವಾರರು ಚಚಡಿ ಗ್ರಾಮದಿಂದ ಬೈಲಹೊಂಗಲಕ್ಕೆ ಬರುವಾಗ ಈ ಅಪಘಾತ ಸಂಭವಿಸಿದೆ. ಕಾರನಲ್ಲಿದ್ದವರೂ ಪರಾರಿಯಾಗಿದ್ದಾರೆ.

ಸ್ಥಳಕ್ಕೆ ವಿರೇಶ ಮಠಪತಿ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ. 
ಈ ಕುರಿತು ಮುರಗೋಡ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Post a Comment

0 Comments