ಎಂ. ಕೆ. ವಾಣಿ
ಚನ್ನಮ್ಮನ ಕಿತ್ತೂರು: ಹಿಂದುಗಳ 5,000 ವರ್ಷಗಳ ಹೋರಾಟದ ಫಲವಾಗಿ ನಾಳೆ ಅಯೋಧ್ಯೆ ಇಲ್ಲಿ ಮರೆಯಾದ ಪುರುಷೋತ್ತಮ ಶ್ರೀರಾಮ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದ್ದು
ಬರೋಬ್ಬರಿ 7 ಸಾವಿರ ವರ್ಷಗಳ ಹಿಂದೆ ಭೂಮಿಯಲ್ಲಿ ಅವತರಿಸಿದ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಪವಿತ್ರ ಜನ್ಮಭೂಮಿಯಲ್ಲಿ ಭವ್ಯ ಮಂದಿರದ ದೇವಾರ್ಪಣೆ ನಡೆಯುವ ಅಮೃತ ಘಳಿಗೆ ಸೋಮವಾರ ಶುಭ ದಿನ ಶುಭ ಘಳಿಗೆಯ 12.20ರ ಸುಮುಹೂರ್ತದಲ್ಲಿ ಪ್ರಾಣಪ್ರತಿಷ್ಠೆಗೊಳ್ಳಲಿರುವ ಶ್ರೀರಾಮ ಲಲ್ಲಾನ ಪ್ರಥಮ ಪೂಜೆಯನ್ನು ಕಣ್ತುಂಬಿಕೊಳ್ಳಲು ದೇಶವಾಸಿಗಳು ಕಾತರದಿಂದ ಕಾಯುತ್ತಿದ್ದಾರೆ.
ಅಯೋಧ್ಯೆಯ ಚರಿತ್ರೆಯನ್ನು ಚರಿತ್ರಾರ್ಹಗೊಳಿಸಲು ಭಕ್ತ ರಾಜ್ಯದ ಹಳ್ಳಿ ಹಳ್ಳಿಯಲ್ಲೂ ಸಿದ್ಧತೆ ಮಾಡಿಕೊಂಡಿದ್ದು, ಶಿವಪೂಜೆಯ ಪುಣ್ಯದಿನವಾದ ಸೋಮವಾರ ಶಿವಭಕ್ತ ಶ್ರೀರಾಮನ ತಾರಕ ಮಂತ್ರ ಎಲ್ಲೆಲ್ಲೂ ಅನುರಣಿಸಲಿದೆ.
ಎಲ್ಲೆಲ್ಲೂ ಕೇಸರಿ ಸಿಂಗಾರ
ಎಲ್ಲ ಹಳ್ಳಿ, ಪಟ್ಟಣಗಳ ಭೇದವಿಲ್ಲದೆ ಎಲ್ಲೆಲ್ಲೂಕೇಸರಿ ಭಗವಾಧ್ವಜ, ಕೇಸರಿ ಬಂಟಿಂಗ್ ಕಟ್ಟುವ ಕಾರ್ಯ ಆರಂಭಗೊಂಡಿದ್ದು, ಭಾನುವಾರ ಸಂಜೆ ವೇಳೆಗೆ ಪೂರ್ಣಗೊಳ್ಳಲಿದೆ. ಧನುರ್ಧಾರಿ ಶ್ರೀರಾಮನ ಚಿತ್ರವಿರುವ ಕೇಸರಿ ಧ್ವಜದ ಮಾರಾಟ ತಾಲೂಕು ಕೇಂದ್ರಗಳಲ್ಲಿ ನಡೆಯುತ್ತಿದೆ. ಕೇಸರಿ ಶಲ್ಯ ಮಾರಾಟವೂ ಭರ್ಜರಿಯಾಗಿ ನಡೆಯುತ್ತಿದೆ
ಫ್ಲೆಕ್ಸ್ ವೈಭವ
ಪುಟ್ಟ ಗಾತ್ರದ ಫ್ಲೆಕ್ಸ್ನಿಂದ ಹಿಡಿದು ವಿರಾಟ್ ಗಾತ್ರದವರೆಗಿನ ಭವ್ಯ ಫ್ಲೆಕ್ಸ್ಗಳು ಬೆಳಗಾವಿ ಮತ್ತು ಹುಬ್ಬಳ್ಳಿ ಧಾರವಾಡ ಜಿಲ್ಲೆಯಾದ್ಯಂತ ನಗರ, ಹೆದ್ದಾರಿ ಪಾಶ್ರ್ವಗಳಲ್ಲಿಕಂಗೊಳಿಸುತ್ತಿವೆ. ಭವ್ಯ ರಾಮ ಮಂದಿರದ ಚಿತ್ರ, ಬಿಲ್ಲುಹಿಡಿದ ಕೋದಂಡರಾಮನ ಚಿತ್ರದ, ಶ್ರೀರಾಮ ಪಟ್ಟಾಭಿಷೇಕದ ಚಿತ್ರಗಳು ರಾರಾಜಿಸುತ್ತಿವೆ.
ಚನ್ನಮ್ಮನ ಕಿತ್ತೂರಿನ ವಿದ್ಯಾ ಗಿರಿ ಇಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಇಂದಿನಿಂದ ಸ್ವಚ್ಛತೆ ಕಾರ್ಯಕ್ರಮ ಮತ್ತು ನಾಳೆ ದೀಪ ಬೆಳಗುವ ಕಾರ್ಯಕ್ರಮ ಮತ್ತು ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿದೆ ಹಲವಾರು
ದೇವಸ್ಥಾನ, ಭಜನಾ ಮಂದಿರ ಸೇರಿದಂತೆ ಶ್ರದ್ಧಾಕೇಂದ್ರಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಪ್ರತಿಷ್ಠೆಯ ಕ್ಷಣಗಳನ್ನು ನೇರ ಪ್ರಸಾರ ಮಾಡುವ ಎಲ್ಇಡಿ ವ್ಯವಸ್ಥೆ ಮಾಡಲಾಗಿದೆ. 15 ದಿನಗಳ ಹಿಂದೆಯೇ ಎಲ್ಇಡಿ ಬುಕ್ಕಿಂಗ್ ನಡೆದಿದ್ದು, ಜಿಲ್ಲೆಯ ಎಲ್ಇಡಿ ಮಾರ್ಕೆಟ್ ಪೂರ್ತಿ ಬುಕ್ಕಿಂಗ್ ಆಗಿದ್ದಲ್ಲದೆ, ವಾರದಿಂದೀಚೆಗೆ ಎಲ್ಇಡಿಗೆ ಶೋಧಿಸಿದವರಿಗೆ ನಿರಾಶೆ ಎದುರಾಗಿದೆ.
ಮುಗಿಲು ಮುಟ್ಟಲಿದೆ ತಾರಕ ಮಂತ್ರ
ಶ್ರೀರಾಮ ಜಯ ರಾಮ ಜಯ ಜಯ ರಾಮ ಎಂಬ 13 ಅಕ್ಷರಗಳ ರಾಮ ತಾರಕ ಮಂತ್ರವನ್ನು ಪಠಿಸಲು ಶ್ರದ್ಧಾಕೇಂದ್ರಗಳಲ್ಲಿಸಿದ್ಧತೆಯಾಗಿದೆ. ಬೆಳಗಾವಿ ಜಿಲ್ಲೆಯ ಹಾಗೂ ಧಾರವಾಡ ಜಿಲ್ಲೆಯ ದೇವಾಲಗಳಲ್ಲಿ ರಾಮ ತಾರಕ ಯಜ್ಞ ನಡೆಯಲಿದೆ.
ಕೆಲವು ಖಾಸಗಿ ಶಾಲೆಗಳಲ್ಲಿರಾಮ ನಾಮ ತಾರಕ ಮಂತ್ರ ಪಠಣ, ರಾಮಾಯಣ ರಸಪ್ರಶ್ನೆ ಸ್ಪರ್ಧೆ, ರಾಮಕಥಾ ನೃತ್ಯ ವೈವಿಧ್ಯ ನಡೆಯಲಿದೆ.
ಕೆಲವು ಶಿಕ್ಷಣ ಕೇಂದ್ರಗಳಲ್ಲಿರಾಮ ಪ್ರತಿಷ್ಠಾ ಸಪ್ತಾಹದ ಹೆಸರಿನಲ್ಲಿಸರಣಿ ವಿಚಾರಸಂಕಿರಣ ನಡೆದಿದ್ದು, ಸೋಮವಾರ ಸಮಾರೋಪ ನಡೆಯಲಿದೆ.
ಉತ್ತರಾಭಿಮುಖ ಆರತಿ
ಜನವರಿ 22ರಂದು ಮುಸ್ಸಂಜೆಯ ಹೊತ್ತಿಗೆ ಮನೆ ಮನೆಗಳ ಜಗಲಿಯಲ್ಲಿಹಣತೆಗಳನ್ನು ಬೆಳಗಿ ಅಯೋಧ್ಯಾ ದೀಪಾವಳಿ ಆಚರಿಸಲು ಖುದ್ದು ಪ್ರಧಾನಿಯವರೇ ಕರೆ ನೀಡಿದ್ದು, ಅದರಂತೆ ರಾಮಭಕ್ತರು ಅಂದು ದೀಪಾವಳಿ ಆಚರಿಸಲಿದ್ದಾರೆ. ಹಣತೆ ಬೆಳಗಿದ ಬಳಿಕ ಅಯೊಧ್ಯೆ ಇರುವ ಉತ್ತರ ದಿಕ್ಕಿನತ್ತ ಮುಖ ಮಾಡಿ ಆರತಿ ಬೆಳಗಿ ಶ್ರೀರಾಮ ನಾಮಸ್ಮರಣೆ ಮಾಡಲು ಕರೆ ನೀಡಲಾಗಿದೆ.
ವಿಜಯೋತ್ಸವವಿಲ್ಲ
ಶ್ರೀರಾಮ ಪ್ರಾಣಪ್ರತಿಷ್ಠೆಯ ದಿನ ಭಕ್ತರು ಭಜನಾ ಸಂಕೀರ್ತನೆ, ರಾಮನಾಮ ಜಪ, ಹಣತೆ ಬೆಳಗುವಿಕೆ ಇವೇ ಮುಂತಾದ ಧಾರ್ಮಿಕ ವಿಧಿಗಳಲ್ಲಿ ಮಾತ್ರ ತೊಡಗಿಕೊಳ್ಳಬೇಕು. ಇದರ ಹೊರತಾಗಿ ಯಾವುದೇ ರೀತಿಯ ಮೆರವಣಿಗೆ, ವಿಜಯೋತ್ಸವ, ಸುಡುಮದ್ದು ಪ್ರದರ್ಶನ ಮುಂತಾದ ಆಚರಣೆ ಮಾಡಬಾರದೆಂದು ಅಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವಿನಂತಿಸಿದೆ.
"ಜನವರಿ 22 ಇಡೀ ಭಾರತದ ಚರಿತ್ರೆಯಲ್ಲಿಸುವರ್ಣ ಅಕ್ಷರಗಳಲ್ಲಿಬ ರೆದಿಡುವ ದಿನ. ಅಂದು ಹಿಂದೂಗಳೆಲ್ಲ ಶ್ರೀರಾಮನ ಧ್ಯಾನ ಮಾಡುತ್ತಾ ದೀಪಾವಳಿ ಹಣತೆ ಬೆಳಗಬೇಕು. ಪ್ರಾಣ ಪ್ರತಿಷ್ಠೆಯ ನೇರ ಪ್ರಸಾರ ವೀಕ್ಷಿಸಬೇಕು. ಸಮೀಪದ ದೇವಾಲಯಕ್ಕೆ ಭೇಟಿ ನೀಡಿ ಅಲ್ಲಿ ನಡೆಯುವ ಧಾರ್ಮಿಕ ವಿಧಿಗಳಲ್ಲಿ ಭಕ್ತಿಪೂರ್ವಕವಾಗಿ ಪಾಲ್ಗೊಳ್ಳಬೇಕು. ತಮ್ಮ ಮನೆ ಮುಂದೆ ಭಗವಾಧ್ವಜ ಹಾರಿಸಬೇಕು ಎಂದು ಮನವಿ ಮಾಡುತ್ತಿದ್ದೇವೆ." ಶಿವು ಹಿರೇಮಠ ನಗರಸೇವಕ ಭಜರಂಗ ದಳ
"ಹಿಂದುಗಳ ಐದು ನೂರು ವರ್ಷಗಳ ಕನಸು ನನಸಾಗಿದೆ ಭಾರತೀಯರೆಲ್ಲರೂ ಜಾತಿ ಭೇದ ಮರೆತು ನಾಳಿನ ಅಯೋಧ್ಯ ರಾಮದೀಪಾವಳಿ ಎನ್ನು ಆಚರಿಸಬೇಕು ಹಿಂದುಗಳ ಹೆಮ್ಮೆಯ ವಿಷಯ ಇದಾಗಿದೆ" ಕಿರಣ್ ಪಾಟೀಲ ಪಟ್ಟಣ ಪಂಚಾಯತಿ ಸದಸ್ಯರು
0 Comments