Belagavi : ಬೆಳಗಾವಿ ಪಾಲಿಕೆಯಲ್ಲಿ ಮತ್ತೆ ಎಂಇಎಸ್‌ ಖ್ಯಾತೆ: ಮರಾಠಿ ಭಾಷೆಯಲ್ಲೇ ಸಭೆ ನಡಾವಳಿ ಪತ್ರ ನೀಡುವಂತೆ ಮೊಂಡುತನ

ಬೆಳಗಾವಿ (ಆ.17) :  ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ತನ್ನ ಅಸ್ಥಿತ್ವ ಕಳೆದುಕೊಂಡಿರುವ ಎಂಇಎಸ್‌ ಝಾಪಾಗಳು, ಮಹಾನಗರ ಪಾಲಿಕೆಯಲ್ಲಿ ಮತ್ತೆ ಕ್ಯಾತೆ ತೆಗೆಯುವ ಮೂಲಕ ಅಸ್ಥಿತ್ವ ಉಳಿಸಿಕೊಳ್ಳಲು ಹೆಣ ಗಾಡುತ್ತಿದ್ದಾರೆ. ಬುಧವಾರ ನಡೆದ ಮಹಾನಗರ ಪಾಲಿಕೆಯ ಪರಿಷತ್‌ ಸಾಮಾನ್ಯ ಸಭೆಯಲ್ಲಿ ಮರಾಠಿ ಭಾಷೆಯಲ್ಲಿಯೇ ಸಭಯೆ ನಡುವಳಿ ಪತ್ರವನ್ನು ನೀಡಬೇಕೆಂದು ಮೊಂಡುವಾದ ಪ್ರದರ್ಶಿಸಿ ಧರಣಿ ನಡೆಸಿದ್ದಾರೆ.

ಇಲ್ಲಿನ ಮಹಾನಗರ ಪಾಲಿಕೆ ಪರಿಷತ್‌ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಾಮಾನ್ಯ ಸಭೆಯ ಆರಂಭವಾಗುತ್ತಿದ್ದಂತೆ ಮರಾಠಿ ಭಾಷೆಯಲ್ಲಿ ಪಾಲಿಕೆಯ ಸಭೆಯ ನಡುವಳಿ ಪತ್ರವನ್ನು ನೀಡಬೇಕೆಂದು ಎಂಇಎಸ್‌ ಸದಸ್ಯ ರವಿ ಸಾಳುಂಕೆ ನೇತೃತ್ವದಲ್ಲಿ ಮೂವರು ಪಾಲಿಕೆಯ ಕೌನ್ಸಿಲ… ಸಭಾಂಗಣದಲ್ಲಿ ಧರಣಿ ನಡೆಸಿ ಕೊಲಾಹಲ ಸೃಷ್ಟಿಸಿ, ಸಭೆ ಆರಂಭದಲ್ಲಿಯೇ ಖ್ಯಾತೆ ತೆಗೆದ ಎಂಇಎಸ್‌ ಸದಸ್ಯರು ಇಡೀ ಸಭೆಯ ದಿಕ್ಕು ತಪ್ಪಿಸಲು ಯತ್ನಿಸಿದರು. ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಎಲ್ಲ ಭಾಷಿಕ ಸದಸ್ಯರು ಚುನಾಯಿತರಾಗಿ ಆಯ್ಕೆಯಾಗಿದ್ದಾರೆ. ನಮಗೆ ಮರಾಠಿ ಭಾಷೆಯಲ್ಲಿ ಪಾಲಿಕೆ ಸಭೆಯ ನಡುವಳಿಯನ್ನು ನೀಡಬೇಕೆಂದು ಒತ್ತಾಯಿಸಲಾಗಿತ್ತು.‌ಅದರಂತೆ ಮೇಯರ ಒಪ್ಪಿಗೆ ನೀಡಿದ್ದರೂ ಈಗಲೂ ನಮಗೆ ಮರಾಠಿ ಭಾಷೆಯಲ್ಲಿ ಸಭೆಯ ನಡುವಳಿ ಪತ್ರ ನೀಡಲಿಲ್ಲ ಎಂದು ಆರೋಪಿಸಿ ಎಂಇಎಸ್‌ ಸದಸ್ಯ ರವಿ ಸಾಳುಂಕೆ ನೇತೃತ್ವದಲ್ಲಿ ನಾಗೇಶ ಮಂಡೋಲ್ಕರ, ವೈಶಾಲಿ ಬಾತಖಾಂಡೆ ಮೂವರು ಸದಸ್ಯರು ಧರಣಿ ನಡೆಸಿದರು.


Post a Comment

0 Comments