ಕಿತ್ತೂರು ವಿಜಯ್ ಸುದ್ದಿ.ಚನ್ನಮ್ಮನ ಕಿತ್ತೂರು - ಕಿತ್ತೂರಿನ ತಹಶೀಲ್ದಾರ ಅವರ ಮೂಲಕ ವಸತಿ ಸಚಿವರಿಗೆ ಮನವಿ ನೀಡಿ ರಾಣಿ ಚನ್ನಮ್ಮ ನವಭಾರತ ಸೇನೆ ರಾಜ್ಯ ಸಂಚಾಲಕರಾದ ಜಗದೀಶ ಕಡೋಲಿ ಅವರು ಮಾತನಾಡಿ. ಹಲವು ವರ್ಷಗಳಿಂದ ಪಟ್ಟಣ ಪಂಚಾಯಿತಿಗಳಿಗೆ ವಸತಿ ಮನೆಗಳು ಮಂಜೂರು ಆಗಿಲ್ಲ ಬಡ ಫಲಾನುಭವಿಗಳು ಗೋಳು ಕೇಳುವವರು ಯಾರೂ. ವಸತಿ ಯೋಜನೆಯಡಿಯಲ್ಲಿ ವಸತಿ ಮನೆಗಳು ಮಂಜೂರು ಆಗತ್ತಿಲ್ಲ
ರಾಣಿ ಚನ್ನಮ್ಮ ನವಭಾರತ ಸೇನೆ ರಾಜ್ಯ ಯುವ ಕಾರ್ಯದರ್ಶಿ ಬಸವರಾಜ ಭೀಮರಾಣಿ ಅವರು ಮಾತನಾಡಿ. ಸಾಕಷ್ಟು ಬಡ ಫಲಾನುಭವಿಗಳು ವಸತಿ ಯೋಜನೆಯಡಿ ಮನೆಗಳಿಗೆ ಅರ್ಜಿ ಹಾಕಬೇಕು ಎಂದು ನಮ್ಮಗೂ ಒಂದು ಮನೆ ಸಿಗಬಹುದು ಎಂದು ಕಾಯುತ್ತಿದ್ದಾರೆ ವಸತಿ ಸಚಿವರು ಎಲ್ಲಿ ಇದ್ದಿರ್ರಿ ಪಟ್ಟಣ ಪಂಚಾಯಿತಿಗಳು ನಿಮ್ಮ ಗಮನಕ್ಕೆ ಬರತ್ತಿಲ್ಲವಾ ಬಡ ಫಲಾನುಭವಿಗಳ ಗೋಳು ಕೇಳುವವರಿಲ್ಲ ಇಲ್ಲದಂತಾಗಿದೆ. ಸಾಕಷ್ಟು ಬಡ ಫಲಾನುಭವಿಗಳು ಬಾಡಿಗೆ ಕಟ್ಟುವುದಕ್ಕೆ ಆಗದೆ ಸ್ವಂತ ಮನೆ ಇಲ್ಲದೆ ಪರಡಾರುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೊಡಲೇ ವಸತಿ ಸಚಿವರಾದ ಜಮಿರ್ ಅಹಮ್ಮದ್ ಅವರು ಪಟ್ಟಣ ಪಂಚಾಯಿತಿಗಳ ಬಗ್ಗೆ ಗಮನ ಹರಿಸಿ ಆದಷ್ಟು ವಸತಿ ಯೋಜನೆಯಡಿಯಲ್ಲಿ ಮನೆಗಳನ್ನು ಮಂಜೂರು ಮಾಡಬೇಕೆಂದು ಎಂದು ರಾಣಿ ಚನ್ನಮ್ಮ ನವಭಾರತ ಸೇನೆ ಒತ್ತಾಯ.
0 Comments