ರೈತರಿಗೆ ಬಡ್ಡಿ ರಹಿತ ಸಾಲ ಒದಗಿಸಿದ ಹೆಮ್ಮೆ ನನಗಿದೆ: ಲಕ್ಷ್ಮಣ ಸವದಿ
ಇಷ್ಟು ದೊಡ್ಡ ಪ್ರಮಾಣದ ಬಡ್ಡಿರಹಿತ ಸಾಲ ಯೋಜನೆ ಜಾರಿಗೆ ತರಲು ಕಷ್ಟಕರವಾಗಿತ್ತು. ನಾನು ಯಾವುದಕ್ಕೂ ಯೋಚನೆ ಮಾಡದೆ ರೈತರಿಗೆ ಅನುಕೂಲ ಮಾಡಿಕೊಡಬೇಕೆಂಬ ಒಂದೇ ಉದ್ದೇಶದಿಂದ ಈ ಕೆಲಸ ಮಾಡಿದ್ದೇನೆ: ಲಕ್ಷ್ಮಣ ಸವದಿ
ಕಾಗವಾಡ(ನ.28): ರಾಜ್ಯದಲ್ಲಿ ಎಷ್ಟು ಜನ ಮುಖ್ಯಮಂತ್ರಿಗಳು ಆಡಳಿತ ನಡೆಸಿದ್ದಾರೋ ಅವರು ತಾವು ಪ್ರತಿನಿಧಿಸುವ ಜಿಲ್ಲೆಯಲ್ಲಿನ ರೈತರಿಗೆ ಅಷ್ಟೊಂದು ಬಡ್ಡಿ ರಹಿತ ಸಾಲ ಕೊಡಲು ಸಾಧ್ಯವಾಗಿಲ್ಲ. ಆದರೆ, ಸಹಕಾರ ಸಚಿವನಾಗಿದ್ದಾಗ ರೈತರಿಗೆ ಬಡ್ಡಿ ರಹಿತ ಸಾಲ ಮಂಜೂರು ಮಾಡಿದ ಹೆಮ್ಮೆ ನನಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿಗಳು ಹಾಗೂ ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಕಾಗವಾಡ ತಾಲೂಕಿನ ಮೋಳೆ ಗ್ರಾಮದಲ್ಲಿ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದಲ್ಲಿ ನೂತನವಾಗಿ ನಿರ್ಮಿಸಿದ ಗೋದಾಮ ಉದ್ಘಾಟಿಸಿ ಮಾತನಾಡಿದ ಅವರು, ಇಷ್ಟು ದೊಡ್ಡ ಪ್ರಮಾಣದ ಬಡ್ಡಿರಹಿತ ಸಾಲ ಯೋಜನೆ ಜಾರಿಗೆ ತರಲು ಕಷ್ಟಕರವಾಗಿತ್ತು. ನಾನು ಯಾವುದಕ್ಕೂ ಯೋಚನೆ ಮಾಡದೆ ರೈತರಿಗೆ ಅನುಕೂಲ ಮಾಡಿಕೊಡಬೇಕೆಂಬ ಒಂದೇ ಉದ್ದೇಶದಿಂದ ಈ ಕೆಲಸ ಮಾಡಿದ್ದೇನೆ ಎಂದ ಅವರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಮಹತ್ವ ಬರಲು ನೆರವಿಗೆ ಬಂದಿದ್ದು ಬಡ್ಡಿರಹಿತ ಸಾಲ. ರಾಜ್ಯ ಸರ್ಕಾರದ ವತಿಯಿಂದ ಬಡ್ಡಿ ರಹಿತ ಸಾಲ ಕೊಟ್ಟಿರುವ ಪರಿಣಾಮ ಸಹಕಾರಿ ಸಂಘಗಳ ಇಂದು ಪ್ರಗತಿಯ ಹಾದಿಯಲ್ಲಿವೆ. ಯಾರೂ ಮಾಡದ ಕೆಲಸವನ್ನು ನಾಡಿನ ರೈತರಿಗೋಸ್ಕರ ಮಾಡಿದ್ದೆನೆ ಎಂದು ಲಕ್ಷ್ಮಣ ಸವದಿ ಅಭಿಪ್ರಾಯಪಟ್ಟರು.
0 Comments