ಕಿತ್ತೂರು ವಿಜಯ ಸುದ್ದಿ ಚನ್ನಮ್ಮನ ಕಿತ್ತೂರಿಗೆ ಕನ್ನಡಕ ಸಾಹಿತ್ಯಕ್ಕೆ ಮೊದಲ ಬಾರಿಗೆ ಬೂಕರ್ ಪ್ರಶಸ್ತಿ ತಂದ ಬಾನು ಮುಸ್ತಾಕ್.


 ಕಿತ್ತೂರು ವಿಜಯ ಸುದ್ದಿ.ಕನ್ನಡಕ್ಕೆ ಮೊದಲ ಬೂಕರ ಪ್ರಶಸ್ತಿ ತಂದ ಬಾನು ಮುಸ್ತಾಕ್ ರಿಗೆ ಅಭಿನಂದನೆಗಳು.

ಡಾ.ಎಸ್.ಬಿ.ದಳವಾಯಿ.

ಚನ್ನಮ್ಮನ ಕಿತ್ತೂರು:- ಕನ್ನಡ ಸಾಹಿತ್ಯಕ್ಕೆ ಮೊದಲ ಬಾರಿಗೆ ಬೂಕರ್ ಗೌರವ ಪಡೆಯುವದರಮೂಲಕ ಅಂತರಾಷ್ಟ್ರೀಯ ಮನ್ನಣೆ ದೊರಕಿಸಿಕೊಟ್ಟ ಲೇಖಕಿ,ಹೋರಾಟಗಾರ್ತಿ, ವಕೀಲೆ ಬಾನು ಮುಸ್ತಾಕ್ ಇವರಿಗೆ ಅಭಿನಂದನೆಗಳನ್ನು ಕಿತ್ತೂರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಎಸ್.ಬಿ.ದಳವಾಯಿ ಸಲ್ಲಿಸಿದರು. 2025 ರ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು ಮೇ 20 ರಂದು ಲಂಡನ್ ನ ಟೇಡ್ ಮಾಡರ್ನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನೀಡಲಾಗಿದೆ. ಬಾನು ಮುಪ್ತಾಕ್ ಅವರ " ಎದೆಯ ಹಣತೆ " ಕಥಾ ಸಂಕಲನವನ್ನು ಕೊಡಗಿನ ದೀಪಾ ಭಸ್ತಿ ಇವರು " ಹಾರ್ಟ್ ಲ್ಯಾಂಪ್" ಹೆಸರಿನ ಶೀರ್ಷಿಕೆಯ ಅಡಿ ಆಂಗ್ಲ ಭಾಷೆಯಲ್ಲಿ 66 ಅನುವಾದಿಸಿದ್ದನ್ನು ಸ್ಮರಿಸಬಹುದಾಗಿದೆ ಎಂದು ಡಾ.ಎಸ್.ಬಿ.ದಳವಾಯಿ ತಿಳಿಸಿದರು. ಸುಮಾರು 57.28 ಲಕ್ಷ ಮೌಲ್ಯದ ಬಾನು ಮುಸ್ತಾಕ್ ಅವರ ಕಥಾ ಸಂಕಲನವು ಅಂತರಾಷ್ಟ್ರೀಯ ಬ್ರೂಕರ್ ಪ್ರಶಸ್ತಿಯನ್ನು ಗೆದ್ದ ಮೊದಲ ಕನ್ನಡದ ಕೃತಿಯಾಗಿರುವದು ಹೆಮ್ಮೆಯ ವಿಷಯವಾಗಿದೆ ಎಂದು ಸಂತಸ ವ್ಯಕ್ತ ಪಡಿಸಿದರು. ಬಾನು ಮುಸ್ತಾಕ್ ಅವರು ತಮಗೆ ದೊರೆತ ಈ ಪ್ರಶಸ್ತಿಯು ಕನ್ನಡ ಸಾಹಿತ್ಯಕ್ಕೆ ಸಿಕ್ಕ ಗೆಲುವು ಎಂದಿರುವದು ಸ್ವಾಗತಾರ್ಹವಾದುದಾಗಿದ್ದು ಕನ್ನಡದ ಹಿರಿಮೆಯನ್ನು ಹೆಚ್ಚಿಸಿದ ಬಾನು ಮುಪ್ತಾಕ್ ಮತ್ತು ದೀಪಾ ಭಸ್ತಿ ಇವರುಗಳಿಗೆ ಧನ್ಯವಾದಗಳನ್ನು ಕಿತ್ತೂರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿ ತಿಳಿಸಿದ್ದಾರೆ.

Post a Comment

0 Comments